ಒಟ್ಟಿನಲಿ ತತ್ವವಿದು
July 8, 2011
ಒಟ್ಟಿನಲಿ ತತ್ವವಿದು, ವಿಕಟ ರಸಿಕನೋ ಧಾತ
ತೊಟ್ಟಿಲನು ತೂಗುವನು ಮಗುವ ಜಿಗುಟುವನು
ಸಿಟ್ಟಿನ್ ಓಡವುಟ್ಟುಗಳೊಳಾಗಿಪನು, ಸೋಲಿಪನು
ತುತ್ತು ವಿಕಟಿಗೆ ನಾವು – ಮಂಕುತಿಮ್ಮ
ಒಟ್ಟಿನಲಿ ತಿಳಿಯ ಬೇಕಾದ್ದು ಇಷ್ಟೇ. ನಮ್ಮನ್ನೆಲ್ಲ ಭೂಮಿಗೆ ತಂದ ದೇವರು ವಿನೋದ ಪ್ರಿಯನು. ಆದರೆ ನಾವುಗಳು ಅವನ ವಿನೋದಕ್ಕೆ ತುತ್ತುಗಳು. ನಮಗೆ ಎಲ್ಲ ಕೊಡುತ್ತಾನೆ. ಎಲ್ಲ ಕಸಿದು ಕೊಳ್ಳುತ್ತಾನೆ, ನಾವು ಅತ್ತರು ಅವನಿಗೆ ಆನಂದವೇ, ನಕ್ಕರು ಅವನಿಗೆ ಆನಂದವೇ. ಎಲ್ಲಾ ನಮ್ಮದು, ಎಲ್ಲಾ ನಮ್ಮಿಂದ ಎಂಬ ಭ್ರಮೆಯನ್ನು ಕಳಚಿ ಎಲ್ಲಾ ಅವನ ವಿನೋದ ಲೀಲೆಗಳು ಎಂದು ತಿಳಿದು ಬಾಳಿ ಮುಗಿಸುವುದು ಅಷ್ಟೇ ನಮ್ಮ ಪಾಲಿಗೆ ಬಿಟ್ಟದ್ದು. ನಮ್ಮ ಸೋಲು ಅವನದೇ ನಮ್ಮ ಗೆಲುವು ಅವನದೇ.
No comments yet